ಕರಿಯ 2, ಗಣಪ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ಸಂತೋಷ್ ನಟನೆಯ ಸತ್ಯಂ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಸದ್ಯ ಒಂದು ಮಿಲಿಯನ್ ಹಿಟ್ಸ್ ದಾಖಲಿಸಿದ ಖುಷಿಯಲ್ಲಿದೆ ಚಿತ್ರತಂಡ.
ನನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಸತ್ಯಂ ವಿಭಿನ್ನ ಕಾನ್ಸೆಪ್ಟ್ನ ಚಿತ್ರ. ನಮ್ಮ ತಂದೆ (ದಿ. ಆನೇಕಲ್ ಬಾಲರಾಜ್) ಕೂಡ ಕಥೆಯನ್ನು ಇಷ್ಟಪಟ್ಟಿದ್ದರು. ಇದೀಗ ಟೀಸರ್ಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗುತ್ತಿದೆ. ಸಿನಿಮಾ ಕೂಡಾ ತುಂಬಾ ಚೆನ್ನಾಗಿ ಮೂಡಿಬಂದಿದೆ` ಎಂಬುದು ಸಂತೋಷ್ ಅನಿಸಿಕೆ.
ಸತ್ಯಂ ಚಿತ್ರಕ್ಕೆ ಅಶೋಕ್ ಕಡಬ ಆಕ್ಷನ್ ಕಟ್ ಹೇಳಿದ್ದಾರೆ. ಎರಡು ಕಾಲಘಟ್ಟಗಳ ಕಥೆ ಈ ಚಿತ್ರದಲ್ಲಿದೆ. ಕರಾವಳಿ ಭಾಗದಲ್ಲಿ ನಡೆಯುವಂತಹ ಕೋಲದ ಚಿತ್ರಣವೂ ಚಿತ್ರದಲ್ಲಿದೆ ಎನ್ನುತ್ತಾರೆ ನಿರ್ದೇಶಕ.
ಮಾಂತೇಶ್ ವಿ ಕೆ ಈ ಚಿತ್ರದ ನಿರ್ಮಾಪಕ. ಕನ್ನಡ ಹಾಗೂ ತೆಲುಗಿನಲ್ಲಿ `ಸತ್ಯಂ` ರಿಲೀಸ್ ಆಗಲಿದೆ. ರಂಜಿನಿ ರಾಘವನ್ ಈ ಸಿನಿಮಾದ ನಾಯಕಿ.
ತಾತ ಮೊಮ್ಮಗನ ಸುತ್ತ ನಡೆಯುವಂಥ ಕಥೆ ಇದು. ಪಂಜುರ್ಲಿ ದೈವಾರಾಧನೆ ಮಾಡುವ ರಾಜ ಕುಟುಂಬದಲ್ಲಿ, ಆ ಪದ್ಧತಿ ತಪ್ಪಿ ಅನಾಹುತಗಳು ಸಂಭವಿಸುತ್ತಿರುತ್ತವೆ. ಮುಂದೆ ಅದೇ ಕುಟುಂಬದ ನಾಯಕ ೪೦ ವರ್ಷಗಳ ನಂತರ ಊರಿಗೆ ಬಂದಾಗ ಏನೆಲ್ಲ ನಡೆಯುತ್ತದೆ ಎಂಬುದೇ ಕಥೆ’ ಎನ್ನುತ್ತಾರೆ ನಿರ್ದೇಶಕ.
ಜನವರಿ ನಲ್ಲಿ ಸತ್ಯಂ ರಿಲೀಸ್ ಮಾಡಿಸುವ ಇರಾದೆ ಚಿತ್ರತಂಡದ್ದು. ರವಿ ಬಸ್ರೂರು ಚಿತ್ರಕ್ಕೆ ಸಂಗೀತ ನೀಡಿದ್ದು, ಸಿನಿಟೆಕ್ ಸೂರಿ ಛಾಯಾಗ್ರಾಹಕ.